Author Archives: sowmyalathar

ವಡಕ್ಕು ತಿರುವೀದಿಪಿಳ್ಳೈ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ  ನಾವು, ಹಿಂದಿನ ಲೇಖನದಲ್ಲಿ ನಮ್ಬಿಳ್ಳೈ (https://guruparamparaikannada.wordpress.com/2021/02/17/nampillai/) ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ವಡಕ್ಕು ತಿರುವೀದಿಪಿಳ್ಳೈ ಬಗ್ಗೆ  ನೋಡೋಣ.

ವಡಕ್ಕು ತಿರುವೀದಿಪಿಳ್ಳೈ – ಕಾಂಚೀಪುರಂ

ತಿರು ನಕ್ಷತ್ರ೦: ಆಣಿ ಸ್ವಾತಿ

ಅವತಾರ ಸ್ಥಳ೦: ಶ್ರೀರಂಗಂ

ಆಚಾರ್ಯರು:  ನಮ್ಪಿಳ್ಳೈ ಅವರು

ಶಿಷ್ಯರು: ಪಿಳ್ಳೈ ಲೋಕಾಚಾರ್ಯರು, ಅೞಗಿಯ ಮಣವಾಳ ಪೆರುಮಾಳ್ ನಾಯನಾರ್, ಮುಂತಾದವರು.

ಪರಮಪದ ಸ್ಥಳ೦: ಶ್ರೀರಂಗಂ

ಕೃತಿ: ಈಡು ೩೬೦೦೦ ಪಡಿ

ಅವರಿಗೆ ಶ್ರೀ ಕೃಷ್ಣ ಪಾದ ಎಂಬ ಹೆಸರಿತ್ತು, ತರುವಾತ ವಡಕ್ಕು ತಿರುವೀದಿಪಿಳ್ಳೈ ಎಂದು ಹೆಸರುವಾಸಿಯಾದರು. ಅವರು ನಮ್ಪಿಳ್ಳೈ ಯವರ ಪ್ರಮುಖ್ಯ ಶಿಷ್ಯರಾಗಿದ್ದರು.

ವಡಕ್ಕು ತಿರುವೀದಿಪಿಳ್ಳೈಯವರು ಆಚಾರ್ಯ ನಿಷ್ಠೆಯಿಂದ ಇದ್ದರು ಮತ್ತು ಗೃಹಸ್ಥಾಶ್ರಮವನ್ನು ಪ್ರಾರಂಭಿಸಿದರು. ಅವರಿಗೆ ಮಕ್ಕಳ ಬಗ್ಗೆ ಒಲವಿರಲಿಲ್ಲ. ಅವರ ನಡವಳಿಕೆಯಿಂದ ಚಿಂತೆಗೊಂಡು, ಅವರ ತಾಯಿ ನಮ್ಪಿಳ್ಳೈ ಹತ್ತಿರ ಮೊರೆಯಿಟ್ಟರು. ಇದನ್ನು ಕೇಳಿದ ನಮ್ಪಿಳ್ಳೈ ವಡಕ್ಕು ತಿರುವೀದಿಪಿಳ್ಳೈಯವರನ್ನು  ಅವರ ಸಹಧರ್ಮಿಣಿ ಸಮೇತ ಆಮಂತ್ರಿಸಿ, ಅವರಿಗೆ ಗೃಹಸ್ಥಾಶ್ರಮ ಧರ್ಮವನ್ನು ಮತ್ತು ದಾಂಪತ್ಯ ಜೀವನವನ್ನು ತೊಡಗಿಸಿಕೊಳ್ಳುವಂತೆ ಆಶೀರ್ವದಿಸಿದರು. ತಮ್ಮ ಆಚಾರ್ಯರ ಆದೇಶವನ್ನು ಸ್ವೀಕರಿಸಿ, ಶೀಘ್ರವೇ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರು.  ನಮ್ಪಿಳ್ಳೈ  ಅವರ  ಕೃಪೆಯಿಂದ ಜನಿಸಿದ   ಮಗುವಿಗೆ ಪಿಳ್ಳೈ ಲೋಕಾಚಾರ್ಯನ್ ಎಂದು ಹೆಸರಿಟ್ಟರು ಮಗುವಿನ ತಂದೆ ವಡಕ್ಕು ತಿರುವೀದಿ ಪಿಳ್ಳೈ ಅವರು.  ನಮ್ಪಿಳ್ಳೈ ಅವರು ಆ ಮಗುವಿಗೆ ಅೞಗಿಯ ಮಣವಾಳನ್ ಎಂದು ಹಸರಿಡಲು  ಅಪೇಕ್ಷಿಸಿದ್ದರು. ಇದನ್ನು ತಿಳಿದ ನಮ್ ಪೆರುಮಾಳ್, ವಡಕ್ಕು ತಿರುವೀದಿಪಿಳ್ಳೈಯವರಿಗೆ ಇನ್ನೊಂದು ಮಗುವಾಗುವಂತೆ ಆಶೀರ್ವದಿಸಿದರು.  ಅೞಗಿಯ ಮಣವಾಳನ್ (ನಮ್ ಪೆರುಮಾಳ್) ಅನುಗ್ರಹದಿಂದ  ಜನಿಸಿದ ಎರಡನೆಯ ಮಗುವಿಗೆ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಎಂದು ಹಸರಿಡಲಾಯಿತು. ಹೀಗೆ ವಡಕ್ಕು ತಿರುವೀದಿಪಿಳ್ಳೈಯವರು ಏರಡು ಮಹತ್ವದ ರತ್ನಗಳನ್ನು ನಮ್ಮ ಸಂಪ್ರದಾಯಕ್ಕೆ ಕೊಟ್ಟಿದ್ದಾರೆ.  ಅವರನ್ನು ಪೆರಿಯಾೞ್ವಾರಿಗೆ  ಹೋಲಿಸಬಹುದು.

  • ಪೆರಿ ಆಳ್ವಾರ್  ಮತ್ತು ವಡಕ್ಕು ತಿರುವೀದಿಪಿಳ್ಳೈಅವರು ಆಣಿ ಸ್ವಾತಿ ನಕ್ಷತ್ರದಲ್ಲಿ ಜನಿಸಿದರು.
  • ಪೆರಿ ಆಳ್ವಾರ್ ಅವರು ತಿರುಪ್ಪಲ್ಲಾಣ್ಡು ಮತ್ತು ಪೆರಿಯಾೞ್ವಾರ್ ತಿರುಮೊೞಿಯನ್ನು ಎಂಪೆರುಮಾನನ ಅನುಗ್ರಹದಿಂದ ರಚಿಸಿದರು ಮತ್ತು ವಡಕ್ಕು ತಿರುವೀದಿಪಿಳ್ಳೈಯವರು ಈಡು 36000 ಪಡಿಯನ್ನು ನಮ್ಪಿಳ್ಳೈಯವರ ಅನುಗ್ರಹದಿಂದ ರಚಿಸಿದರು.
  • ಪೆರಿಅೞ್ವಾರರು ನಮ್ಮ ಸಂಪ್ರದಾಯಕ್ಕೆ ಆಂಡಾಳ್ಳನ್ನು ಕೊಟ್ಟು ಮತ್ತು ಅವರಿಗೆ ಕೃಷ್ಣಾನುಭವವನ್ನು ಉಣ್ಣಿಸಿ ಬೆಳೆಸಿದುರು. ವಡಕ್ಕು ತಿರುವೀದಿಪಿಳ್ಳೈಯವರು ನಮಗೆ ಪಿಳ್ಳೈ ಲೋಕಾಚಾರ್ಯನ್ ಮತ್ತು ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರನ್ನು ಕೊಟ್ಟು, ಅವರಿಬ್ಬರಿಗೂ ಭಗವತ್   ಅನುಭವವನ್ನು ಉಣ್ಣಿಸಿ ಬೆಳೆಸಿದುರು.

ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ದಿನಗಳನ್ನು ನಮ್ಬಿಳ್ಳೈಯವರ ತಿರುವಾಯ್ಮೊೞಿ ಕಾಲಷೇಪವನ್ನು ಕೇಳಿ ಕಲಿಯುತ್ತಲೇ  ಕಳೆದರೆು ಹಾಗು  ಇಡೀ ರಾತ್ರಿ ಅದನ್ನು ತಾಳೆಗರಿಯಲ್ಲಿ ಬರೆಯುವುದನ್ನು ಬಳಕೆಯಾಗಿ ಇಟ್ಟುಕೊಂಡಿದ್ದರು. ಈ ಪ್ರಕಾರವಾಗಿ ಅವರು ಈಡು 36000 ಪಡಿಯನ್ನು ನಮ್ಬಿಳ್ಳೈಯವರ ಕಾಲಕ್ಷೇಪವನ್ನು ಕೇಳಿ ಅವರಿಗೆ ತಿಳಿಯದಂತೆ ಬರೆಯುತ್ತಿದ್ದರು. ಒಮ್ಮೆ ವಡಕ್ಕು ತಿರುವೀದಿಪಿಳ್ಳೈಯವರು ನಮ್ಬಿಳ್ಳೈಯವರನ್ನು ತಮ್ಮ ತಿರುಮಾಳಿಗೈಗೆ ತದಿಯಾರಾದನಕ್ಕೆ ಆಹ್ವಾನಿಸಿದರು. ನಮ್ಬಿಳ್ಳೈಯವರು ಆಹ್ವಾನವನ್ನು ಸ್ವೀಕರಿಸಿ ಅವರ ತಿರುಮಾಳಿಗೈಗೆ ಹೋದರು. ನಮ್ಬಿಳ್ಳೈಯವರು ತಿರುವಾರಾಧನಂ ಮಾಡುತ್ತಿದ್ದರು. ಆಗ, ನಮ್ಪಿಳ್ಳೈ ಅವರು ಕೊಯಿಲ್ ಆಳ್ಟಾರ್ ಬಳಿ   ಇದ್ದ ತಾಳೆಗರಿಯಲ್ಲಿ ಬರೆದಿದ್ದ ವ್ಯಾಖ್ಯಾನವನ್ನು ನೊಡಿದರು. ತುಂಬ ಆಸಕ್ತಿಯಿಂದ ಅವರು ಅದನ್ನು ಓದಲು  ಪ್ರಾರಂಭಿಸಿದರು. ಆಗ, ಅವರು ತಾಳೆಗರಿಯ ಬಗ್ಗೆ ವಡಕ್ಕು ತಿರುವೀದಿಪಿಳ್ಳೈಯವರನ್ನು ವಿಚಾರಿಸಿದರು. ವಡಕ್ಕು ತಿರುವೀದಿಪಿಳ್ಳೈಯವರು ತಾವು ನಮ್ಬಿಳ್ಳೈಯವರಿಂದ ಕೇಳಿದ ಕಾಲಕ್ಷೇಪವನ್ನು ತಾಳೆಗರಿಯಲ್ಲಿ ಬರೆದರೆಂದು ನಮ್ಬಿಳ್ಳೈಯವರಿಗೆ ವಿವರಿಸಿದರು. ನಮ್ಬಿಳ್ಳೈಯವರು ವಡಕ್ಕು ತಿರುವೀದಿಪಿಳ್ಳೈಯವರಿಗೆ ತಿರುವಾರಾಧನಂ ಮಾಡಲು ಹೇಳಿ, ಅವರು ತಾಳೆಗರಿಯನ್ನು ಓದಲು ಮುಂದುವರಿಸಿದರು. ನಮ್ಬಿಳ್ಳೈಯವರು ತಾಳೆಗರಿಯಲ್ಲಿ ಬರೆದಿರುವುದನ್ನು ಪೆರಿಯವಾಚಾನ್ ಪಿಳ್ಳೈಯವರಿಗೆ ಮತ್ತು ಈಯುಣ್ಣಿ ಮಾಧವ ಪೆರುಮಾಳ್  ಅವರಿಗೆ ಕೊಟ್ಟು ಪರಿಶೀಲಿಸುವಂತೆ ಹೇಳಿದರು. ಅವರಿಬ್ಬರೂ ಅದನ್ನು ಓದಿ, ತುಂಬ ಸಂತೋಷದಿಂದ ಪ್ರಶಂಸಿಸಿದರು. ನಮ್ಬಿಳ್ಳೈಯವರು ತಮ್ಮ ಅನುಮತಿ ಇಲ್ಲದೆ ಏಕೆ ಬರೆದರೆಂದು ವಡಕ್ಕು ತಿರುವೀದಿಪಿಳ್ಳೈಯವರನ್ನು ಕೇಳಿದರು. ಹಾಗು ಅವರು ಪೆರಿಯವಾಚಾನ್ ಪಿಳ್ಳೈಯವರ ವ್ಯಾಕ್ಯನಕ್ಕೆ ಪೈಪೊಟಿಗಾಗೆ ಬರೆದರಾ ಎಂದು ಕೇಳಿದಾಗ, ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಮೇಲೆ ಅಸಮಾಧಾನಗೊಂಡ ನಮ್ಬಿಳ್ಳೈಯವರ ಪಾದ ಕಮಲಕ್ಕೆ ಬಿದ್ದು, ಮುಂಬರುವ ಕಾಲದಲ್ಲಿ ಅವರು ಪರಾಮರ್ಶೆ ಮಾಡಲು ಬರೆದರೆಂದು ವಿವರಿಸಿದರು.  ಸಮಾಧಾನದಿಂದ ಮನ ಒಪ್ಪಿ, ನಮ್ಬಿಳ್ಳೈಯವರು ವ್ಯಾಖ್ಯಾನವನ್ನು ಪ್ರಶಂಸಿಸಿದರು.ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಕಾಲಕ್ಷೇಪವನ್ನು ಕೇಳಿ, ಯಾವ ವಿಷಯವನ್ನೂ ಬಿಡದೇ ಬರೆದಿರುವುದನ್ನು ನೊಡಿ, ಅವರನ್ನು ಅವತಾರ ವಿಷೇಶಂ ಎಂದು ಭಾವಿಸಿದರು.ಅವರು ಈ ವ್ಯಾಖ್ಯಾನವನ್ನು ಈಯುಣ್ಣಿ ಮಾಧವ ಪೆರುಮಾಳ್  ಅವರಿಗೆ (ನನ್ಜೀಯರ್  ಅವರ ಪೂರ್ವಾಶ್ರಮದ ಹೆಸರು ಮಾದವರ್) ಕೊಟ್ಟರು ಮತ್ತು ಅದನ್ನು ಈಯುಣ್ಣಿಯವರ ವಂಶಜರಿಗೆ ಬೋಧಿಸಿದರು. ಅಂತಿಮವಾಗಿ, ಮಣವಾಳ ಮಾಮುನಿಗಳಿಗೆ ಬರುವಂತೆ ಹಾಗೂ ಮಾಮುನಿಗಳಿಂದ ಎಲ್ಲರಿಗೂ ತಿಳಿಯಪಡಿಸುವಂತೆ ಮಾಡಲು ನಮ್ಬಿಳ್ಳೈಯವರು ವಡಕ್ಕು ತಿರುವೀದಿಪಿಳ್ಳೈಯವರಿಗೆ ಹೇಳಿದರು. ಎಂಪ್ಪೆರುಮಾನಿನ ಅನುಗ್ರಹದಿಂದ, ನಮ್ಬಿಳ್ಳೈಯವರಿಗೆ ಮಾಮುನಿಗಳ ರೂಪವನ್ನು ಮುಂಗಾಣುವ ಸಾಮರ್ಥ್ಯವಿತ್ತು. ಅವರು  ಈಯುಣ್ಣಿ ಮಾಧವ ಪೆರುಮಾಳ್  ಅವರ ವಂಶಜರ ಮುಖಾಂತರ ಮಾಮುನಿಗಳಿಗೆ ತಲುಪುವುದು,  ಹಾಗೇ ಅದನ್ನು ಪ್ರಪಂಚಕ್ಕೆ ಸರಿಯಾದ ಸಮಯಕ್ಕೆ ಪ್ರಕಟಿಸುತ್ತಾರೆಂಬ  ಮಾಹಿತಿಯನ್ನು ತಿಳಿಸಿದರು.

ನಮ್ಬಿಳ್ಳೈಯವರು ಪರಮಪದ ಹೊಂದಿದ ಮೇಲೆ ,ವಡಕ್ಕು ತಿರುವೀದಿಪಿಳ್ಳೈಯವರು, ನಮ್ಮ ಸಂಪ್ರದಾಯಕ್ಕೆ ಮುಖ್ಯಸ್ಥರಾದರು. ಅವರು ಪಿಳ್ಳೈ ಲೋಕಾಚಾರ್ಯನ್ ಮತ್ತು ಅೞಗಿಯ ಮಣವಾಳ ಪೆರುಮಾಳ್ ನಾಯನಾರವರಿಗೆ ತಾತ್ಪರ್ಯಗಳನ್ನು ಬೋಧಿಸಿದರು. ಶ್ರೀವಚನ ಭೂಶಣ ಎಂಬ ದಿವ್ಯ ಗ್ರಂಥದಲ್ಲಿ, ಪಿಳ್ಳೈ ಲೋಕಾಚಾರ್ಯರು ವಡಕ್ಕು ತಿರುವೀದಿಪಿಳ್ಳೈಯವರ ಬೋಧನೆಗಳನ್ನು ಕೆಲವು ಕಡೆ ಉಲ್ಲೇಖಿಸಿದ್ದಾರೆ:

  • ಸೂತ್ರ 77ರಲ್ಲಿ, ಯಾವಾಗಲೂ ನಾವು ಅಹಂಕಾರವನ್ನು ಬಿಟ್ಟು  ಆತ್ಮವನ್ನು  ಅಡಿಯಾನ್ ಎಂದಷ್ಟೇ ಕರೆಯಬೇಕೆಂದು  ಹೇಳಿದ್ದಾರೆ. “ಯತೀಂದ್ರ ಪ್ರವಣಂ ಪ್ರಭಾವದಲ್ಲಿ” ಇದನ್ನು ವಡಕ್ಕು ತಿರುವೀದಿಪಿಳ್ಳೈಯವರು ವಿವರಿಸಿದ್ದಾರೆ.
  • ಸೂತ್ರ 443ರಲ್ಲಿ, “ಯವಾಗಲೂ ಜೀವಾತ್ಮ ಈ ಸಂಸಾರದಲ್ಲಿ ಅನಾದಿ ಕಾಲದಿಂದಲೂ ಸ್ವ ಸ್ವಾತಂತ್ರಿಯದಿಂದ ಇದೆ, ಈ ಸಂಸಾರದಿಂದ ಜೀವಾತ್ಮ ವನ್ನು ಮುಕ್ತಿಗೊಳಿಸಲು ಸದಾಚಾರ್ಯರಲ್ಲಿ ಶರಣಾಗತಿ ಒಂದೇ ದಾರಿ ಎಂದು ವಡಕ್ಕು ತಿರುವೀದಿಪಿಳ್ಳೈಯವರು ಹೇಳಿದ್ದಾರೆಂದು” ಪಿಳ್ಳೈ ಲೋಕಾಚಾರ್ಯರು ವಿವರಿಸಿದ್ದಾರೆ.

ಸ್ವಲ್ಪ ಸಮಯದ ನಂತರ, ವಡಕ್ಕು ತಿರುವೀದಿಪಿಳ್ಳೈಯವರು ತಮ್ಮ ಆಚಾರ್ಯರಾದ ನಮ್ಬಿಳ್ಳೈಯವರನ್ನು ಧ್ಯಾನಿಸುತ್ತಾ,  ತಮ್ಮ   ಚರ್ಮ ಶರೀರವನ್ನು ಬಿಟ್ಟು ಪರಮಪದ  ಹೊಂದರು.

ವಡಕ್ಕು ತಿರುವೀದಿಪಿಳ್ಳೈಯವರ ಪಾದ ಕಮಲಕ್ಕೆ ಬಿದ್ದು, ಎಂಪೆರುಮಾನಾರ್   ಮತ್ತು ನಮ್ಮ ಆಚಾರ್ಯರೊಂದಿಗೆ ನಮ್ಮ ಬಂಧನವನ್ನು    ವೃದ್ಧಿಪಡಿಸುಲು ಪ್ರಾರ್ಥಿಸೊಣ.

ವಡಕ್ಕು ತಿರುವೀದಿಪಿಳ್ಳೈ ತನಿಯನ್:

ಶ್ರೀ ಕೃಷ್ಣ ಪಾದ ಪಾದಾಬ್ಜೇ ನಮಾಮಿ ಶಿರಸಾ ಸದಾ |
ಯತ್ ಪ್ರಸಾದ ಪ್ರಭಾವೇನ ಸರ್ವ ಸಿಧ್ದಿರಬೂನ್ಮಮ ||

ಪಿಳ್ಳೈ ಲೋಕಾಚಾರ್ಯರ ವೈಭವನ್ನು ಮುಂದಿನ ಲೇಖನದಲ್ಲಿ ನೋಡೋಣ.

ಅಡಿಯೇನ್ ರಾಮಾನುಜ ದಾಸನ್, ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಸಂಗ್ರಹ – https://guruparamparai.wordpress.com/2012/09/17/vadakku-thiruveedhi-pillai/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ ಬೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮಣಕ್ಕಾಲ್ ನಂಬಿ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಉಯ್ಯಕ್ಕೊಣ್ಡಾರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರ್ಗಳಲ್ಲಿ, ಮುಂದೆ ಮಣಕ್ಕಾಲ್ ನಂಬಿ ಬಗ್ಗೆ ನೊಡೋಣ .

(https://guruparamparaikannada.wordpress.com/2018/01/23/uyyakkondar/)

ಮಣಕ್ಕಾಲ್ ನಂಬಿ – ಮಣಕ್ಕಾಲ್

ತಿರು ನಕ್ಷತ್ರ೦: ಮಾಸಿ, ಮಖಮ್

ಅವತಾರ ಸ್ಥಳ೦:  ಮಣಕ್ಕಾಲ್ (ಕಾವೇರಿ ನದಿಯ ದಡದಲ್ಲಿ ಇರುವ ಒಂದು ಗ್ರಾಮ, ಶ್ರೀರಂಗದ ಹತ್ತಿರ)

ಆಚಾರ್ಯರು: ಉಯ್ಯಕ್ಕೊಣ್ಡಾರ್

ಶಿಷ್ಯರು: ಆಳವಂದಾರ್, ತಿರುವರಂಗ ಪೆರುಮಾಳ್ ಅರಯರ್ ( ಆಳವಂದಾರರ ಮಗ), ದೈವದುಕ್ಕರಸು ನಂಬಿ, ಪಿಳ್ಳೈ ಅರಸು ನಂಬಿ, ಸಿರು ಪುಳ್ಳುರುಡೈಯಾರ್ ಪಿಳ್ಳೈ, ತಿರುಮಾಲಿರುಂಚೋಲೈ ದಾಸರ್, ವಂಗಿಪುರತು ಆಯ್ಚಿ.

ಶ್ರೀ ರಾಮ ಮಿಸ್ರರ್ ಮಣಕ್ಕಾಲ್ ಎಂಬ ಗ್ರಾಮದಲ್ಲಿ ಜನಿಸಿದರು. ಕಾಲ ಕ್ರಮೇಣ ಅವರು ಮಣಕ್ಕಾಲ್ ನಂಬಿ ಎಂದು ಜನಪ್ರಿಯವಾದರು.

ಅವರು ತಮ್ಮ ಆಚಾರ್ಯರಾದ ಉಯ್ಯಕೊಂಡಾರರ ಜೊತೆಗೆ ಇದ್ದು ೧೨ ವರ್ಷಗಳ ಕಾಲ ಸೇವೆ ಮಾಡಿದರು. ಅ ಸಮಯದಲ್ಲಿ ಉಯ್ಯಕ್ಕೊಂಡಾರರ  ಧರ್ಮ ಪತ್ನಿ ಪರಮಪದಿಸಿದರು , ಮಣಕ್ಕಾಲ್ ನಂಬಿ ಆಚಾರ್ಯರ ಗೃಹವನ್ನು ಮತ್ತು ಅವರ ಮಕ್ಕಳ ಜವಾಬ್ದಾರಿಯನ್ನು ವಹಿಸಿ ಕೊಳುತ್ತಾರೆ. ಓಮ್ಮೆ, ತಮ್ಮ ಆಚಾರ್ಯರ ಮಕ್ಕಳು ಕಾವೇರಿ ನದಿಯಿಂದ ಹಿಂದಿರುಗುವಾಗ, ಕೆಸರುಗುಂಡಿಯನ್ನು ದಾಟಲು ಹಿಂದುಮುಂದು ನೋಡಿದರು. ಅವಾಗ ನಂಬಿ ಕೆಸರುಗುಂಡಿ ಮೇಲೆ ಬೀದ್ದು, ಅವರನ್ನು ದಾಟಿಹೊಗಲು ಹೇಳಿದರು. ಇದನ್ನು ಕೇಳಿದ, ಉಯ್ಯಕ್ಕೊಂಡಾರರು ತುಂಬ ಸಂತುಷ್ಟಗೊಂಡರು ಮತ್ತು ತಮ್ಮ ತಿರುವಡಿಯನ್ನು ನಂಬಿಯ ತಿರುಮುಡಿಯ ಮೇಲೆ ಇಟ್ಟರು. ಅವರು ನಂಬಿಯ ಬೇಡಿಕೆಯನ್ನು ಕೇಳಿದರು, ಅಗ ನಂಬಿಯವರು ಆಚಾರ್ಯರ ಸೇವೆಯನ್ನು ಬೇಡಿದರು. ಉಯ್ಯಕೊಂಡಾರರು ತಮ್ಮ ಶಿಷ್ಯನ ಮಾತು ಕೇಳಿ ಅತ್ಯಂತ ಸಂತುಷ್ಟಗೊಂಡರು, ಮತ್ತು ದ್ವಯ ಮಹಾ ಮಂತ್ರೋಪದೇಶವನ್ನು   ಮತ್ತೊಮ್ಮೆ  ಮಾಡಿದರು.

ಉಯ್ಯಕೊಂಡಾರರು ಪರಮಪದಕ್ಕೆ ಹೊಗುವ ಮುನ್ನ ನಂಬಿಯನ್ನು ತಮ್ಮ  ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ ಮತ್ತು ಈಶ್ವರ ಮುನಿಯ ಮಗನನ್ನು ನಮ್ಮ ಸಂಪ್ರದಾಯದ ಮುಖ್ಯಸ್ಥರನ್ನಾಗಿಸಲು ಶಿಕ್ಷಣ ಕೊಡುವಂತೆ ಆದೇಶಿಸುತ್ತಾರೆ. ಈಶ್ವರ ಮುನಿಯ ಮಗನಾಗಿ ಯಮುನೈತುರೈವನ್ ಜನ್ಮಿಸಿದರು ಮತ್ತು ಅವರ ಪಂಚ ಸಂಸ್ಕಾರವನ್ನು ನಂಬಿ ಮಾಡುತ್ತಾರೇ (ಆ ಕಾಲದಲ್ಲಿ,ಮಗು ಹುಟ್ಟಿ ೧೧ದಿನ ನಾಮಕರಣ ಮಾಡುವಾಗ ಶಂಖ ಚಕ್ರ ಲಾಂಚನ ಮಾಡುವುದು ವಾಡಿಕೆಯಾಗಿತ್ತು – ಶಿಷ್ಯನು ತಿರುಮಂತ್ರದ ಅರ್ಥ ಉಪದೇಶವನ್ನು ಮತ್ತು ತಿರುವಾರಾದನ ಮಾಡುವ ವಿಧಾನವನ್ನು ಪರಿಪಕ್ವತೆ ಪಡೆದ ನಂತರ ಕಲಿತ್ತುಕೊಳುತ್ತಾರೆ).

ಯಮುನೈತುರೈವರು ತುಂಬ ಬುದ್ಧಿವಂತರು , ಆಳವಂದಾರ್ ಎಂದು ಹೆಸರುವಾಸಿಯಾದರು, ಅವರಿಗೆ ಅರ್ಧ ರಾಜ್ಯ ಸಿಗುತ್ತದೇ . ಅವರು ರಾಜ್ಯದ ಕೆಲಸದಲ್ಲಿ ಮಗ್ನರಾದರು. ನಂಬಿ ಆಳವಂದಾರನ್ನು ಭೇಟಿಯಾಗಳು ಪ್ರಯತ್ನಿಸುತ್ತಾರೆ, ಅದರೆ ಕಾವಲುಗಾರ ಬಿಡಲಿಲ್ಲ.

ನಂಬಿಯವರು ಆಳವಂದಾರನ್ನು ಸುಧಾರಿಸುವ ಕೆಲಸವನ್ನು ತೆಗೆದುಕೊಳ್ಳುತ್ತಾರೇ. ತಮ್ಮ ಶಿಷ್ಯನನ್ನು ಪುನಃ ನಮ್ಮ ಸಂಪ್ರದಾಯಕ್ಕೇ ಆಕರ್ಷಿಸಲು, ಅವರು ತೂದುವಳೈ (ಕಕಮುಂಜಿ, ಅಂಬುಸಂದೆಬಲ್ಲಿ) ಎಂಬ ಸೊಪ್ಪನ್ನು ದಿನವು ಅರಮನೆ ಅಡಿಗೆಮನೆಯ ಕೈಂಕರ್ಯಪರಿಗೆ ಕೊಡುತ್ತಾರೇ. ಆಳವಂದಾರು ಅದನ್ನು ತುಂಬ ಇಷ್ಟಪಡುತ್ತಾರೆ. ಇದ್ದಕ್ಕಿದ್ದಂತೆ ಒಂದು ದಿನ ಸೊಪ್ಪು  ಬರುವುದು ನಿಂತುಹೊಯಿತು, ಕೈಂಕರ್ಯಪರನ್ನು ಎನಾಯಿತೆಂದು ಕೇಳುತ್ತಾರೆ. ಅವರು ಒಬ್ಬ ಶ್ರೀವೈಷ್ಣವರು ದಿನವು ಸೊಪ್ಪನ್ನು ಕೊಡುತ್ತಿದ್ದರು  ಮತ್ತು ಈಗ ಸೊಪ್ಪು  ಕೊಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ತಿಳಿಸುತ್ತಾರೇ. ಆಳವಂದಾರರಿಗೆ ಅ ಶ್ರೀವೈಷ್ಣವರು ಮಣಕ್ಕಾಲ್ ನಂಬಿ ಎಂದು ತಿಳಿದಕೂಡಲೆ, ಅವರನ್ನು ಅರಮನೆಗೆ ಆಹ್ವಾನಿಸಿ ಗೌರವಿಸುತ್ತಾರೆ. ಅವರಿಗೆ ಯಾವ ಸಂಪತ್ತು ಬೇಕೆಂದು ಕೇಳುತ್ತಾರೇ. ತಮ್ಮ ನಿಜವಾದ ಸಂಪತ್ತು (ಶ್ರೀವೈಷ್ಣವಶ್ರಿ) ನಾಧಮುನಿಗಳು ರಚಿಸಿರುವರು ಮತ್ತು ಅದನ್ನು ಆಳವಂದಾರರಿಗೆ ಕೊಡಲು ಬಯಸುತ್ತಾರೇ ಎಂದು ಮಣಕ್ಕಾಲ್ ನಂಬಿ ಹೇಳುತ್ತಾರೇ. ಇದನ್ನು ಕೇಳಿದ ಆಳವಂದಾರರು, ಕಾವಲುಗಾರರಿಗೆ ಯಾವಾಗ ನಂಬಿಯವರು ಬಂದರು ಒಳಗೇ ಬಿಡುವಂತೆ ಆದೇಶನೀಡುತ್ತಾರೇ.

ಮಣಕ್ಕಾಲ್ ನಂಬಿ ಆಳವಂದಾರರಿಗೆ ಭಗವತ್ ಗೀತೆಯ ಪರಿಪೂರ್ಣ  ಅರ್ಥವನ್ನು ಉಪದೇಶ ಮಾಡುತ್ತಾರೆ . ಇದರಿಂದ ಆಳವಂದಾರರು ನಿಧಾನವಾಗಿ  ಪರಿವರ್ತಿಸುತ್ತಾರೇ. ಆಳವಂದಾರರು ಬದಲಾದ ಮೇಲೆ, ಭಗವತ್ ಸಾಕ್ಷಾತ್ಕಾರಕ್ಕೆ  ಗೀತೆಯ ಸಾರಾಂಶವನ್ನು ತಿಳಿದುಕೊಳ್ಳು ಆಸೆ ವ್ಯಕ್ತಪಡಿಸುತ್ತಾರೆ. ಅಗ ನಂಬಿಯವರು ಚರ್ಮ ಶ್ಲೋಕದ ಅರ್ಥವನ್ನು ವಿವರವಾಗಿ ಹೇಳುತ್ತಾರೆ . ಅವರು ಆಳವಂದಾರನ್ನು ಶ್ರೀರಂಗಕ್ಕೆ ಕರೆದುಕೊಂಡು ಬಂದು ಪೆರಿಯ ಪೆರುಮಾಳ್ಳಿನ ಸೇವೆ ಮಾಡಿಸುತ್ತಾರೆ. ಆಳವಂದಾರರು ಪೆರಿಯ ಪೆರುಮಾಳ್ಳಿನ ಸೌಂದರ್ಯಕ್ಕೆ ಸಮ್ಮೋಹನಗೊಂಡು ತಮ್ಮ ಎಲ್ಲ ಲೌಕಿಕ ಮಮತೆಯನ್ನು ಬಿಡುತ್ತಾರೆ.

ನಾಥಮುನಿಗಳ ಆಸೆಯನ್ನು ಪೂರೈಸಿದ ಮೇಲೆ ಮಣಕ್ಕಾಲ್ ನಂಬಿಯವರು ಪರಮಪದಕ್ಕೆ ಸಂತೋಷದಿಂದ  ಹೊರಡುತ್ತಾರೆ. ಅವರು ಆಳವಂದಾರರಿಗೆ ನಾಥಮುನಿಗಳ ಆಸೆ, ನಮ್ಮ ಸಂಪ್ರದಾಯವನ್ನು ರಕ್ಷಿಸು ಮತ್ತು ಪ್ರಚಾರ ಮಾಡಲು ಹೇಳುತ್ತಾರೆ ಹಾಗು ತಮ್ಮ ಹಾಗೆ ನಮ್ಮ ಸಂಪ್ರದಾಯವನ್ನು ಮುಂದೆ ನೆಡೆಸಲು ಒಬ್ಬರನ್ನು ಗುರುತುಹಿಡಿದು ಆಶೀರ್ವದಿಸಲು ಹೇಳುತ್ತಾರೆ. ಹೀಗೆ ಆಳವಂದಾರರ ಆಶೀರ್ವಾದದಿಂದ ರಾಮಾನುಜರು ನಮ್ಮ ಸಂಪ್ರದಾಯದ ಪ್ರವರ್ತಕರಾಗುತ್ತಾರೆ.

ಮಣಕ್ಕಾಲ್ ನಂಬಿಯ ತನಿಯನ್:

ಅಯತ್ನತೋ ಯಾಮುನಂ ಆತ್ಮ ದಾಸಂ ಅಲರ್ಕ್ಕ ಪತ್ರಾರ್ಪ್ಪಣ ನಿಶ್ಕ್ರಯೇಣ  |
ಯಃ ಕ್ರೀತವಾನ್ ಆಸ್ತಿತ ಯೌವರಾಜ್ಯಂ ನಮಾಮಿತಂ ರಾಮಮೇಯ ಸತ್ವಂ ||

ಆಳವಂದಾರ್ ಬಗ್ಗೆ ಮುಂದಿನ ಲೇಖನದಲ್ಲಿ ನೊಡೋಣ.

ಅಡಿಯೇನ್ ರಾಮಾನುಜ ದಾಸನ್,

ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಸಂಗ್ರಹ – http://guruparamparai.wordpress.com/2012/08/25/manakkal-nambi/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org