ನಮ್ಮಾೞ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೆ ಚರ್ಚೆ ಮಾಡಿದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ನಮ್ಮಾೞ್ವಾರ್ರ ಬಗ್ಗೆ ನೊಡೊಣ.

(https://guruparamparaikannada.wordpress.com/2016/02/07/senai-mudhaliar/)

ನಮ್ಮಾೞ್ವಾರ್ – ಆೞ್ವಾರ್ ತಿರುನಗರಿ

ತಿರುನಕ್ಷತ್ರಮ್: ವೈಗಾಸಿ, ವಿಶಾಕಂ

ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕುರುಗೂರ್)

ಆಚಾರ್ಯನ್: ವಿಶ್ವಕ್ಸೇನರ್

ಶಿಷ್ಯರು: ಮಧುರಕವಿ ಆೞ್ವಾರ್, ನಾಥಮುನಿಗಳು ಮತ್ತು ಅವರ ದಾರಿಯಲ್ಲಿ ಬರುವ ಎಲ್ಲಾ ಆಚಾರ್ಯರ್ಗಳು.

ಅವರನ್ನು ಮಾಱನ್, ಶಠಗೊಪನ್, ಪರಾನ್ಕುಶನ್, ವಕುಳಾಭರಣನ್, ವಕುಳಾಭಿರಾಮನ್, ಮಗಿೞ್ಮಾರನ್, ಶಠಜಿತ್, ಕುರುಗೂರ್ ನಂಬಿ ಎಂದು ಹೆಸರಿದೆ.

ನಮ್ಮಾೞ್ವಾರ್ರರು ತಿರುಕ್ಕುರುಗೂರ್ (ಆೞ್ವಾರ್ ತಿರುನಗರಿ)ನಲ್ಲಿ ಕಾರಿ ಮತ್ತು ಉಡಯನಂಗೈ ಎಂಬವರಿಗೆ ಮಗನಾಗಿ ಜನಿಸಿದರು. ಅವರು ಕಲಿಯುಗ ಶುರುವಾಗಿ ಸ್ವಲ್ಪ ದಿನದ ನಂತರ ಜನಿಸಿದರು. ಭಗವತ್ ಗೀತೆಯಲ್ಲಿ, ಶ್ರೀ ಕೃಷ್ಣನು “ಯರೊಬ್ಬನು ಪುನಃ ಪುನಃ ಜನಿಸಿದ್ದರು, ವಾಸುದೆವನನ್ನು ಎಲ್ಲವೆಂದು ತಿಳಿಯುತಾನೊ (ಅವು:- ತಾಯಿ, ತಂದೆ, ಮಕ್ಕಳು, ಐಶ್ವರ್ಯ, ತಾರಕಮ್, ಪೊಶಕ, ಭೋಗ್ಯ, ಪ್ರಪ್ಯಮ್, ಪ್ರಪಕಮ್) ಮತ್ತು ಅವನಿಗೆ ಶರಣಾಗುತಾನೊ, ಅಂತಃ ಙ್ಞಾನಿಯು ಈ ಲೊಕದಲ್ಲಿ ವಿರಳ”. ನಮ್ಮಾೞ್ವಾರ್ರರ ಜಿವನದಿಂದ ಮತ್ತು ಅವರ ಕೃತಿಗಳಿಂದ ನಾವು ತಿಳಿದುಕೊಳ್ಳಬೇಕಾದದು ಏನೆಂದರೆ, ಅವರು ಒಬ್ಬ ಮಹಾ ಜ್ಞಾನಿ ಮತ್ತು ಅವರು ಎಂಬೆರುಮಾನ್ನಿಗೆ ತುಂಬ ಪ್ರೀತಿಪಾತ್ರರು. ಅವರು ತಮ್ಮ ಪುರ್ತಿ ಬದುಕಿನಲ್ಲಿ (ಅವರು ೩೨ ವರುಷ ಈ ಸಂಸಾರದಲ್ಲಿ ಜೀವಿಸಿದರು), ಹುಣಿಸೆ ಮರದಡಿಯಲ್ಲಿ (ತಿುಪುಳಿಯಾೞ್ವಾರ್) ಮತ್ತು ಯಾವಾಗಲು ಎಂಬೆರುಮಾನ್ನಿನ ಧ್ಯಾನದಲ್ಲಿ (ಯೋಗದಲ್ಲಿ) ಇರುತ್ತಿದರು. ಪೂರ್ವಾಚಾರ್ಯ ವ್ಯಾಖ್ಯಾನದಲ್ಲಿ, ನಾವು ಯಾವ ಕ್ಷಣದಲಿ ಕುರುಗೂರ್ ಎಂಬ ಶಬ್ಧವನ್ನು ಕೇಳಿದಕೂಡಲೆ ದಕ್ಷಿಣ ದಿಕ್ಕಿನ ಕಡೆಗೆ ನಮಸ್ಕಾರವನ್ನು ಮಾಡಬೇಕು (ತಿರುವಾಯ್ಮೊೞಿ ದಿವ್ಯ ಪ್ರಬಂಧಂನಲ್ಲಿ, ಎಲ್ಲ ಪದಿಗದ ಕೊನೆಯ ಪಾಸುರಮ್ಗಳ್ಳಲ್ಲಿ ನಮ್ಮಾೞ್ವಾರ್ರ ಹೆಸರು ಮತ್ತು ಅವರ ಅವತಾರ ಸ್ಥಳವಾದ ಕುರುಗೂರ್ ಉಪಸರ್ಗವಾಗಿದೆ) ಎಂದು ಹೇಳಿದ್ದಾರೆ.

ನಮ್ಮಾೞ್ವಾರನ್ನು ಪ್ರಪನ್ನ ಜನ ಕೂಟಸ್ತರ್” ಎಂದು ಕರೆಯುವರು – ಹಾಗೆಂದರೆ, ಪ್ರಪನ್ನ ಗೋಷ್ಠಿಯಲ್ಲಿ ಮೋದಲನೆಯವರು. ಅವರನ್ನು ವೈಷ್ಣವ ಕುಲಪತಿ ಎಂದು ಕರೆಯುವರು – ಹಾಗೆಂದರೆ, ಆಳವಂದಾರ್ ವೈಷ್ಣವ ಕುಲದ ಮುಖ್ಯಸ್ತರು. ಆಳವಂದಾರ್ರ ಸ್ತೋತ್ರ ರತ್ನಮ್ನ ೫ನೆ ಸ್ಲೋಕದಲ್ಲಿ, ಅವರು ವಕೂಲಾಭಿರಾಮನ ಪಾದ ಕಮಲಗಲಿಗೆ ಮಣಿಯುತ್ತೆನೆ ಎಂದು ಹಾಗು ನಮ್ಮಾೞ್ವಾರ್ರರು ಅವರಿಗೆ ಮತ್ತು ತಮ್ಮ ಶಿಷ್ಯಯರು/ವಂಶಸ್ಥರು ಎಲ್ಲವು ಅಗಿರುವರು (ತಂದೆ, ತಾಯಿ, ಮಗು, ಐಶ್ವರ್ಯ, ಮುಂತದವು).

azhvar-emperumanarಆೞ್ವಾರ್ ಶಯನ ತಿರುಕ್ಕೋಲಮ್ ಮತ್ತು ಎಂಬೆರುಮಾನಾರ್ ತಮ್ಮ ಪಾದ ಕಮಲದಲ್ಲಿ – ಆೞ್ವಾರ್ ತಿರುನಗರಿ

ಎಂಬೆರುಮಾನಾರ್ (ಆದಿಸೇಶನ ಅವತಾರ) ಪ್ರಶಂಸಿಸೆಯಿಂದ “ಮಾಱನ್ ಅಡಿ ಪಣಿನ್ದು ಉಯಂದವನ್” (மாறன் அடி பணிந்து உய்ந்தவன்) ಯಾರು ನಮ್ಮಾೞ್ವಾರ್ರಿಗೆ ಶರಣಾಗತನಾಗುತ್ತಾರೊ, ಅವರು ಅಭಿವೃದ್ಧಿ ಪಡೆಯುತ್ತಾರೆ.

ನಮ್ಪಿಳ್ಳೈ, ಪೂರ್ವಾಚಾರ್ಯಗಳ ಕೃತಿಯ ಆಧಾರದಿಂದ, ತಮ್ಮ ಈಡು ವ್ಯಖ್ಯಾನದ ಅವತಾರಿಕೆಯಲ್ಲಿ ಮತ್ತು ತಿರುವಿರುತಮ್ ವ್ಯಖ್ಯಾನದ ಅವತಾರಿಕೆಯಲ್ಲಿ, ನಮ್ಮಾೞ್ವಾರ್ರನ್ನು ಸ್ವತಃ ಎಂಬೆರುಮಾನೆ ಲೀಳಾ ವಿಭೂತಿಯಿಂದ ತಮ್ಮ ವೈಭವವನ್ನು ಹಾಡಲು ಮತ್ತು ಬದ್ದ ಜೀವಾತ್ಮಾನನ್ನು ಶ್ರೀವೈಷ್ಣವನ ಗುಂಪಿಗೆ ಕರೆತರಲು ಆರಿಸಿದ್ದಾರೆ ಎಂದು ದೃಢಪಡಿಸುತ್ತಾರೆ. ನಮ್ಪಿಳ್ಳೈ ಇದನ್ನು ನಮ್ಮಾೞ್ವಾರ್ರ ಮಾತಿನಿಂದ ರುಜುವಾತು ಮಾಡುತ್ತಾರೆ. ಎಂಬೆರುಮಾನು ಸ್ವತಃ ತನ್ನ ಸಂಕಲ್ಪದಿಂದ ನಿರ್ಮಲ ಜ್ಞಾನವನ್ನು ನಮ್ಮಾೞ್ವಾರ್ರಿಗೆ ಕೊಡುತ್ತಾನೆ. ಅದರಿಂದ ಆೞ್ವಾರ್ ಗತಕಾಲ, ವರ್ತಮಾನ ಮತ್ತು ಭವಿಷ್ಯತ್ಕಾಲ ನೊಡುವಂತೆ ಮಾಡುತ್ತಾರೆ. ಈ ಸಂಸಾರದಲ್ಲಿ ಅವರು ಪಟ್ಟ ಅನಾದಿ ಕಷ್ಠವನ್ನು, ತಮ್ಮ ಕೃತಿಯಲ್ಲಿ ಹೇಳಿದಾರೆ.ಅವರು ಈ ಸಂಸಾರದಲ್ಲಿ ಒಂದು ಕ್ಷಣ ಕೂಡ ತಂಗುವುದಿಲ್ಲ ಎಂದು ಹೇಳುತ್ತಾರೆ(ಈ ಸಂಸಾರದಲ್ಲಿ ಜೀವನ ಮಾಡುವುದು ಹೇಗಿದೆ ಏಂದರೆ ಬರಿ ಕಾಲಿನಲ್ಲಿ ಚೆನ್ನಾಗಿ ಕಾದ ನೆಲದ ಮೇಲೆ ನಿಂತಿರುವಂತೆ). ತಿರುವಾಯ್ಮೊೞಿಯ ಮೊದಲ ಪಾಸುರಂನಲ್ಲೆ, ಅವರಿಗೆ ಎಂಬೆರುಮಾನ್ನಿನ ಆಶೀರ್ವದದಿಂದ ತಮಗೆ ದಿವ್ಯ ಜ್ಞಾನವನ್ನು ಪಡೆದಿದ್ದಾರೆ ಎಂದರು. ಈ ಆಧಾರದ ಮೇಲೆ ನಾವು ತಿಳಿದುಕೊಳ್ಳುವುದು ಏನೆಂದರೆ, ಅವರು ಮೊದಲು ಸಂಸಾರಿ (ಬಡ್ದ ಜೀವಾತ್ಮಾ) ಅಗಿದ್ದರು. ಆಮೇಲೆ ಎಂಬೆರುಮಾನ್ನಿನ ಆಶೀರ್ವದದಿಂದ ಅವರಿಗೆ ದಿವ್ಯ ಜ್ಞಾನವು ಲಭಿಸುತ್ತದೆ. ಇದೆ ಎಲ್ಲ ಆೞ್ವಾರ್ಗಲಿಗೆ ಅನ್ವಯಿಕವಗುತ್ತದೆ, ಈ ಕೆಳಗಿನ ಕಾರಣದಿಂದ:

  • ನಮ್ಮಾೞ್ವಾರ್ರನ್ನು ಅವಯವಿ (ಪೂರ್ತಿ) ಮತ್ತು ಎಲ್ಲ ಆೞ್ವಾರ್ರನ್ನು (ಆಂಡಾಳ್ನ ಬಿಟ್ಟು) ಅವಯವ (ಭಾಗವು) ಮತ್ತು
  • ಬೇರೆ ಎಲ್ಲ ಆೞ್ವಾರ್ಗಲು ಇದನ್ನೆ ತಮ್ಮ ಕೃತಿಗಳಲ್ಲಿ ಹೇಳಿದರೆ, ಅವರು ಕೂಡ ಈ ಸಂಸಾರದಲ್ಲಿ ಕಷ್ಠಪಡುತ್ತಿದಾರೆ ಹಾಗು ಅವರಿಗೆ ಎಮ್ಪೆರುಮಾನ್ನಿನ ಆಶೀರ್ವದದಿಂದ ತಮಗೆ ದಿವ್ಯ ಜ್ಞಾನವನ್ನು ಪಡೆದಿದ್ದಾರೆ ಎಂದರು.

ನಮ್ಮಾೞ್ವಾರ್ ೪ ದಿವ್ಯ ಪ್ರಭಂದಂ ಹಾಡಿದಾರೆ. ಅವುಗಳು ಏನೆಂದರೆ,

  • ತಿರುವಿರುತ್ತಮ್ (ರಿಗ್ ವೇದ ಸಾರ)
  • ತಿರುವಾಸಿರಿಯಮ್ (ಯಜುರ್ ವೇದ ಸಾರ)
  • ಪೆರಿಯ ತಿರುವಂದಾದಿ (ಅತರ್ವಣ ವೇದ ಸಾರ)
  • ತಿರುವಾಯ್ಮೊೞಿ (ಸಾಮ ವೇದ ಸಾರ)

ನಮ್ಮಾೞ್ವಾರ್ರ ಪ್ರಭಂದಂಗಳು ೪ ವೇದಗಳಿಗೆ ಸಮವಾಗಿದೆ. ಅವರನ್ನು “ವೇದಮ್ ತಮಿೞ್ ಸೈದ ಮಾಱನ್” (ಸಂಸ್ಕೃತ ವೇದಗಳ ಸಾರವನ್ನು ತಮಿೞ್ ಪ್ರಬಂದಂಗಳ ಮುಲಕ ಕೊಡುವವನು) ಎಂದು ಕರೆಯುತ್ತಾರೆ. ಮತ್ತೆಲ್ಲ ಆೞ್ವಾರ್ರರ ಪ್ರಭಂದವನ್ನು ವೇದಗಳ ಅಂಶವೆಂದು ಪರಿಗಣಿಸಲಾಗಿದೆ (ಅವು ಶೀಕ್ಷಾ, ವ್ಯಾಕರಣ,ಮುಂತದವುಗಳು). ತಿರುವಾಯ್ಮೊೞಿಯನ್ನು ೪೦೦೦ ದಿವ್ಯ ಪ್ರಬಂದಗಳಿನ ಸಾರಾಂಶವೆಂದು ಆೞ್ವಾರ್ರರು ಹಾಡಿದಾರೆ. ನಮ್ಮ ಎಲ್ಲ ಪೂರ್ವಾಚಾರ್ಯಗಳ ಕೃತಿಗಳು (ವ್ಯಾಖ್ಯಾನ ಮತ್ತು ರಹಸ್ಯ ಗ್ರಂಥಗಳು) ತಿರುವಾಯ್ಮೊೞಿಯಿಂದ ಆಯ್ದು ತೆಗೆದಿದ್ದಾರೆ. ತಿರುವಾಯ್ಮೊೞಿಗೆ ಮಾತ್ರ ೫ ವ್ಯಾಖ್ಯಾನಗಳಿವೆ ಮತ್ತು ವಿವರಣೆ ನೀಡುತ್ತಾರೆ.

ನಮ್ಮ ಪೂರ್ವಾಚಾರ್ಯಗಳು, ನಮ್ಮಾೞ್ವಾರ್ರರು ಶ್ರೀದೇವಿ, ಭೂದೇವಿ, ನೀಳಾ ದೇವಿ, ಗೊಪಿಕೆಯರು, ಲಕ್ಶ್ಮಣ, ಭರತಾೞ್ವಾನ್, ಸತ್ರುಗ್ನಾೞ್ವಾನ್, ದಶರತ, ಕೌಸಲ್ಯ, ಪ್ರಹ್ಲಾದಾೞ್ವಾನ್, ವಿಭೀಶಣಾೞ್ವಾನ್, ಹನುಮನ್, ಅರ್ಜುನ, ಮುಂತಾದ ವ್ಯಕ್ತಿಗಳ ಗುಣಲಕ್ಷಣವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಹೇಗೆ ನಮ್ಮಾೞ್ವಾರ್ರರಿಗೆ ಎಲ್ಲ ವ್ಯಕ್ತಿಗಳ ಗುಣಲಕ್ಷಣವನ್ನು ಹೊಂದಿದಾರೊ ಹಾಗೆಯೆ ಎಲ್ಲರು ಕೂಡ ನಮ್ಮಾೞ್ವಾರ್ರರ ಕೆಲವು ಗುಣಲಕ್ಷಣವನ್ನು ಹೊಂದಿದ್ದಾರೆ, ಇದು ನಮ್ಮಾೞ್ವಾರ್ರರ ಖ್ಯಾತಿ.

ತಿರುವಾಯ್ಮೊೞಿ ೭.೧೦.೫ ‘ಪಲರಡಿಯಾರ್ ಮುನ್ಬರುಳಿಯ’ (பலரடியார் முன்பருளிய) ಎಂಬ ಪಾಸುರಂನಲ್ಲಿ, ನಮ್ಪಿಳ್ಳೈ ನಮ್ಮಾೞ್ವಾರ್ರರ ಆಸೆ / ಮನಸನ್ನು ಇಲ್ಲಿ ಅದ್ಬುತವಾಗಿ ವಿವರಿಸಿದಾರೆ. ನಮ್ಮಾೞ್ವಾರ್ರರು ಈ ಪಾಸುರಂನಲ್ಲಿ ಎಂಬೆರುಮಾನ್ನಿನ ಅಶಿರ್ವಾದದಿಂದ ಶ್ರೇಷ್ಠ ಋಷಿಗಳು ( ಶ್ರೀ ವೇದವ್ಯಾಸರು, ಶ್ರೀ ವಾಲ್ಮಿಕಿ ಮಹರ್ಶಿ), ಶ್ರೀ ಪರಾಸರರು ಮತ್ತು ಮುದಲಾೞ್ವಾರ್ಗಳು (ತಮಿೞಿನಲ್ಲಿ ನಿಪುಣರು) ಬದಲಾಗಿ ತಾವು ತಿರುವಾಯ್ಮೊೞಿಯನ್ನು ಹಾಡಿದ್ದಾರೆ.

ಈದನ್ನು ಮನಸಿನಲ್ಲಿ ಇಟ್ಟುಕೊಂಡು, ನಮ್ಮಾೞ್ವಾರ್ರಿನ ಚರಿತ್ರೆಯನ್ನು ನೊಡೊಣ:

ನಮ್ಮಾೞ್ವಾರ್ರರು ಅವಯವಿ (ಪೂರ್ತಿ) ಮತ್ತು ಎಲ್ಲ ಆೞ್ವಾರ್ರನ್ನು (ಆಂಡಾಳ್ನ ಬಿಟ್ಟು) ಅವಯವ (ಭಾಗವು) ಎಂದು ಪರಿಗಣಿಸುತ್ತಾರೆ, ತಿರುಕ್ಕುರುಗೂರ್ ಎಂಬ ಊರಿನಲ್ಲಿ ಆವಿರ್ಭವಿಸುತ್ತಾರೆ. ಈ ಊರು ತಾಮಿರಭರಣಿ ಎಂಬ ನದಿ ತಿರದಲ್ಲಿ ಇದೆ. ಈ ನದಿಯು ಗಂಗಾ, ಯಮುನಾ, ಸರಸ್ವತಿ ಯಂತಃ ಪುನ್ಯ ನದಿಯಾಗಿದೆ. ಅವರು ಕಾರಿ (ಪ್ರಪ್ಪನ್ನ ಕುಲಕ್ಕೆ ಸೆರಿದವರು) ಎಂಬವರಿಗೆ ಮಗನಾಗಿ ಜನಿಸಿದರು.ಈ ಗುಂಪಿನವರು ಶ್ರೀಮನ್ ನಾರಾಯಣನನ್ನು ಬಿಟ್ಟು ಬೇರೆಯವರನ್ನು ಆರಾಧಿಸುವುದಿಲ್ಲ. ಈದನ್ನು ತಿರುಮೞಿಶೈ ಆೞ್ವಾರ್ “ಮಱಂದುಮ್ ಪುಱಮ್ ತೊೞಾ ಮಾಂದರ್” (மறந்தும் புறம் தொழா மாந்தர்). ಅಲ್ಲಿ ತಿರುವಳುತಿ ವಳ ನಾಡರ್ ಎಂಬವರು ಇದ್ದರು, ಅವರ ಮಗ ಅಱಂತಾನ್ಗಿಯಾರ್, ಅವರ ಮಗ ಚಕ್ರಪಾಣಿಯಾರ್, ಅವರ ಮಗ ಅಚ್ಯುತರ್, ಅವರ ಮಗ ಶೆನ್ತಾಮರೈ ಕಣ್ಣರ್, ಅವರ ಮಗ ಪೊಱ್ಕಾರಿಯಾರ್, ಅವರ ಮಗ ಕಾರಿಯಾರ್ ಮತ್ತು ಅವರ ಮಗ ನಮ್ಮಾೞ್ವಾರ್.

ಈ ವೈಶ್ಣವ ಕುಟುಂಬದಲ್ಲಿ, ಪೊಱ್ಕಾರಿಯಾರ್ ತಮ್ಮ ಮಗ ಕಾರಿಗೆ ವೈಶ್ಣವ ಹುಡುಗಿಯನ್ನು ನೋಡಿ ಮದುವೆ ಮಾಡಬೇಕೆಂದುಕೊಂಡರು (ಗ್ರುಹಸ್ತಾಶ್ರಮಕ್ಕೆ ಕಳುಹಿಸಲು). ಪೊಱ್ಕಾರಿ ತಿರುವಣ್ಪರಿಸಾರಮ್ ದಿವ್ಯದೇಶಕ್ಕೆ ಹೊಗಿ ತಿರುವಾೞ್ಮಾರ್ಭರ್ ಎಂಬವರನ್ನು ಭೇಟಿಮಾಡುತ್ತಾರೆ (ಅವರು ತಮ್ಮ ಮಗಳಿಗೆ ಒಬ್ಬ ವೈಶ್ಣವನಿಗೆ ಕೊಟ್ಟು ಮಡುವೆ ಮಾಡಬೇಕೆಂದು ಕೊಂಡಿದ್ದರು ಮತ್ತು ವೈಶ್ಣವ ಸಂತತಿಯನ್ನು ಬಯಸಿದರು). ಮತ್ತು ಅವರ ಮಗಳಾದ ಉಡೈಯ ನಂಗೈಯನ್ನು ತಮ್ಮ ಮಗನಿಗೆ(ಕಾರಿಯಾರ್) ಕೊಟ್ಟು ಮದುವೆ ಮಾಡಿಕೊಡಬೇಕು ಎಂದರು. ತಿರುವಾೞ್ಮಾರ್ಭರ್ ಯವರು ಮದುವೆಗೆ ವೊಪಿಗೆಕೊಟ್ಟರು ಮತ್ತು ಅದ್ಧೂರಿಯಗಿ ಕಾರಿಯಾರ್ ಹಾಗು ಉಡೈಯನಂಗೈಯರ ಮದುವೆ ನಡೆಯಿತು. ಕಾರಿಯಾರ್ ಹಾಗು ಉಡಯನಂಗೈ ತಿರುವಾೞ್ಮಾರ್ಭನ್ ಎಮ್ಪೆರುಮಾನ್ನನ್ನು ತಿರುವಣ್ಪರಿಸಾರಮ್ನಲ್ಲಿ ಪುಜಿಸಿ ತಿರುಕ್ಕುರುಗೂರ್ಗೆ ಹಿಂದಿರುಗುತ್ತಾರೆ. ಹಿಂದಿರುಗಿ ಬಂದಮೇಲೆ, ತಿರುಕ್ಕುರುಗೂರ್ರಿನಲ್ಲಿ ಎಲ್ಲರು ಅವರನ್ನು ಒಳ್ಳೆಯ ಮನೋಭಾವದಿಂದ ಬರಮಾಡಿಕೊಳ್ಳುತಾರೆ. ಹಾಗು ಶ್ರೀ ರಾಮನು ಹೇಗೆ ಸೀತಾ ಪಿರಾಟ್ಟಿಯನ್ನು ವಿವಾಹ ಮಾಡಿಕೊಂಡು ಮಿತಿಲೈಯಿಂದ ಅಯೋದ್ಯಾಗೆ ಕರೆತರುವಾಗ ಹೇಗೆ ಕೊಂಡಾಡಿದರೊ ಹಾಗೆ ಕೊಂಡಾಡಿದ್ದರು.

ಸ್ವಲ್ಪ ಸಮಯದ ನಂತರ, ಕಾರಿಯಾರ್ ಮತ್ತು ಉಡಯನಂಗೈ ತಿರುವಣ್ಪರಿಸಾರಮ್ಗೆ ಬರುತ್ತಾರೆ. ಹಿಂದಿರುಗುವಾಗ, ಅವರು ತಿರುಕ್ಕುರುಂಗುಡಿಗೆ ಹೊಗಿ ನಂಬಿ ಎಂಬೆರುಮಾನ್ನಿನ ಹತ್ತಿರ ಪ್ರಾರ್ಥನೆ ಮಾಡಿಕೋಳ್ಳುತ್ತಾರೆ. ಅವರು ನಂಬಿ ಎಂಬೆರುಮಾನ್ನಿನ ಹತ್ತಿರ ತಮಗೆ ಒಂದು ಮಗು ಬೇಕೆಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ನಂಬಿ ಅವರಿಗೆ ತಾನೆ ಮಗುವಾಗಿ ಹುಟ್ಟುತ್ತೇನೆ ಎಂದು ಮಾತು ಕೊಡುತ್ತಾನೆ. ಅವರು ತಿರುಕ್ಕುರುಗೂರ್ಗೆ ಸಂತೋಷದಿಂದ ಹಿಂದಿರುಗಿ ಬರುತ್ತಾರೆ. ಸ್ವಲ್ಪ ಸಮಯದ ನಂತರ ಉಡಯ ನಂಗೈ ಗರ್ಭವತಿಯಗುತ್ತಾರೆ. ಕಲಿಯುಗ ಬಂದು 43ನೆ ದಿನ ಎಂಬೆರುಮಾನ್ನಿನ ಆಜ್ಞೆಗೆ ಅನುಸಾರವಾಗಿ, ನಮ್ಮಾೞ್ವಾರ್ “ತಿರುಮಾಲಾಲ್ ಅರುಳಪ್ ಪೆಱ್ಱ ಶಠಗೋಪನ್” (திருமாலால் அருளப் பெற்ற சடகோபன்) ಎಂದರೆ ನಮ್ಮಾೞ್ವಾರ್ರರು ಶ್ರೀಮನ್ ನಾರಾಯಣನ ಅನುಗ್ರಹದಿದ ವಿಶ್ವಕ್ಸೇನರ ಅಂಶವಾಗಿ, ಬಹುದಾನ್ಯ ಸಂವತ್ಸರದ (ಪ್ರಮಾದಿ ಸಂವತ್ಸರವೆಂದು ಕರೆಯುತಾರೆ), ವಸಂತ ಋತುವಿನ, ವೈಗಾಸಿ ಮಾಸದ(ವೃಷಭ ಮಾಸ), ಶುಕ್ಲ ಪಕ್ಷದ, ಪೌರ್ಣಮಿ ತಿತಿಯಲ್ಲಿ, ತಿರುವಿಶಾಕ ನಕ್ಶತ್ರದಲ್ಲಿ ಅವತರಿಸಿದರು ಎಂದು ಹೇಳಿದ್ದಾರೆ. ಅಂತೆಯೆ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ತಮ್ಮ ಆಚಾರ್ಯ ಹೃದಯಮ್ನಲ್ಲಿ, “ಆದಿತ್ಯ ರಾಮದಿವಾಕರ ಅಚ್ಯುತ ಬಾನುಕ್ಕಳುಕ್ಕು ನೀಂಗಾದ ಉಳ್ಳಿರುಳ್ ನೀಂಗಿ ಶೋಶಿಯಾತ ಪಿಱವಿಕ್ಕಡಲ್ ಶೋಶಿತ್ತು ವಿಕಸಿಯಾದ ಪೋತಿಲ್ ಕಮಲಮ್ ಮಲರುಮ್ಪಡಿ ವಕುಳಬೂಶನ್ಣ ಬಾಸ್ಕರೋದಯಮ್ ಉಣ್ಡಾಯ್ತ್ತು ಉಡೈಯನಂಗೈಯಾಗಿಱ ಪೂರ್ವಸನ್ದ್ಯೈಯಿಲೇ” (ஆதித்ய ராமதிவாகர அச்யுத பாநுக்களுக்கு நீங்காத உள்ளிருள் நீங்கி சோஷியாத பிறவிக்கடல் சோஷித்து விகஸியாத போதில் கமலம் மலரும்படி வகுளபூஷண பாஸ்கரோதயம் உண்டாய்த்து உடையநங்கையாகிற பூர்வஸந்த்யையிலே) ಎಂದು ಘೋಷಿಸಿದ್ದಾರೆ. ಎಂದರೆ ಸಂಸಾರಿಗಳ ಅಜ್ಞಾನವು ಸೂರ್ಯನ (ಆದಿತ್ಯ) ಆವಿಷ್ಕರಣದಿಂದ ಅಳಿಸಿ ಹಾಕಲಿಲ್ಲ. ಶ್ರೀ ರಾಮನು (ರಾಮ ದಿವಾಕರ) ಭವ್ಯವಾದ ಉಜ್ವಲ ಸೂರ್ಯನಾಗಿದ್ದಾನೆ ಮತ್ತು ಶ್ರೀ ಕೃಷ್ಣನು (ಅಚ್ಯುತ ಬಾನು) ಭವ್ಯವಾದ ಉಜ್ವಲ ಸೂರ್ಯನಾಗಿದ್ದಾನೆ. ಅಜ್ಞಾನವನ್ನು ಅಳಿಸಿ ಹಾಕಿ ಮತ್ತು ನಮ್ಮಾೞ್ವಾರ್ರರ (ವಕುಳಾ ಭೂಶಣ ಬಾಸ್ಕರ) ಅಗಮನದಿಂದ ಜ್ಞಾನವು ಪರಿಪೂರ್ಣವಾಗಿದೆ. ಉಡೈಯನಂಗೈ ನಮ್ಮಾೞ್ವಾರ್ರರಿಗೆ ಜನ್ಮನೀಡಿದರು.

ಆದಿಸೇಶನು ಹುಣಿಸೆ ಮರವಾಗಿ ಆೞ್ವಾರ್ರನು ರಕ್ಷಿಸಲು ಬಂದರು (ಆೞ್ವಾರ್ರು ತಿರುಕ್ಕುರುಗೂರ್ ಆದಿನಾತನ್ ಎಮ್ಪೆರುಮಾನ್ನಿನ ದೇವಸ್ಥಾನದಲ್ಲಿ ಅಶ್ರಯ ಪಡೆಯುತರೆ ಎಂದು).

ಆೞ್ಹ್ವಾರ್ರರ ಆಮೇಲಿನ ಚಟುವಟಿಕೆಯನ್ನು ಮದುರಕವಿ ಆೞ್ವಾರ್ರ ಚರಿತ್ರೆಯಲ್ಲಿ ವರ್ಣಿಸಲಾಗಿದೆ –https://guruparamparaikannada.wordpress.com/2016/06/04/madhurakavi-azhwar/

ನಮ್ಮಾೞ್ವರ್ರರ ತನಿಯನ್

ಮಾತಾ ಪಿತಾ ಯುವತಯ ಸ್ತನಯಾವಿಭೂತಿಃ |
ಸರ್ವಂ ಯೆದೇವ ನಿಯಮೇನ ಮದನ್ವಯಾನಾಂ ||
ಆದ್ಯಸ್ಯನಃ ಕುಲಪತೇಃ ವಕುಳಾಭಿರಾಮಂ |
ಶ್ರೀಮತ್ತದಂಘ್ರಿಯುಗಳಂ ಪ್ರಣಮಾಮಿ ಮೂರ್ಧ್ನಾ ||

மாதா பிதா யுவதயஸ் தநயா விபூதி:
ஸர்வம் ய தேவ நியமேன மத் அந்வயாநாம்
ஆத்யஸ்யந: குலபதேர் வகுளாபிராமம்
ஸ்ரிமத் ததங்க்ரி யுகளம் ப்ரணமாமி மூர்த்நா

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ನೊಡೊಣ –

http://ponnadi.blogspot.in/2012/10/archavathara-anubhavam-nammazhwar.html.

ನಮ್ಮಾೞ್ವರ್ರರ ಗುಣಗಳ ಬಗ್ಗೆ ಅನೇಕ ವ್ಯಕ್ತಿಗಳಿಂದ ಇಲ್ಲಿ ನೊಡಬಹುದು –

http://kaarimaaran.com/songs.html

ನಮ್ಮಾೞ್ವರ್ರರ 32 ನಾಮಗಳನ್ನು ತಿರುಕುರುಗೂರ್ ದೇವಸ್ಥನದಲ್ಲಿ ಅಂಗ್ಲ ಮತ್ತು ತಮಿೞಿನಲ್ಲಿ ಬರೆದಿದಾರೆ.

ನಾಥಮುನಿಗಳಿನ ಬಗ್ಗೆ ಮುಂದಿನ ಲೇಖನದಲ್ಲಿ ನೊಡೊಣ.

ಅಡಿಯೇನ್ ರಾಮಾನುಜ ದಾಸನ್,

ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಮೂಲ: https://guruparamparai.wordpress.com/2012/08/18/nammazhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a comment